BlogLatestTop Storiesರಾಜ್ಯ-Karnatakaವಿಜಯಪುರ-Vijayapura

“ಶಾಸಕರೇ, ದಯವಿಟ್ಟು ಶವ ಸಂಸ್ಕಾರಕ್ಕೆ ರಸ್ತೆ ಮಾಡಿ ಕೊಡಿ”

ತಾಳಿಕೋಟಿ : ಶವ ಸಂಸ್ಕಾರ ಮಾಡಲಿಕ್ಕೆ ಹೋಗಲು ರಸ್ತೆ ಮಾಡಿ ಕೊಡಿ ಎಂದು ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿದ ಘಟನೆ ತಾಲುಕಿನ ಬಾವೂರ ಗ್ರಾಮದಲ್ಲಿ ನಡೆದಿದೆ.

ಬಾವೂರ ಗ್ರಾಮದ ಎಲ್ಲಾ ಧರ್ಮದ ಜನರ ಸಂಕಷ್ಟ ಎನೆಂದರೆ ಯಾರಾದರು ಮರಣ ಹೊಂದಿದರೆ ಶವ ಸಂಸ್ಕಾರ ಮಾಡಲಿಕ್ಕೆ ಹೋಗಲು ಸೊಗಲಿ ಹಳ್ಳ ಅಡ್ಡ ಇರವುದರಿಂದ ನೀರಿನಲ್ಲಿ ಹೋಗಲು ಸಾಧ್ಯವಾಗದಿರುವುದರಿಂದ ಮಾಜಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಶಾಂತಗೌಡ ಪಾಟೀಲ ಶಾಸಕರಲ್ಲಿ ಶವ ಸಂಸ್ಕಾರ ಮಾಡಲಿಕ್ಕೆ ಹೋಗಲು ರಸ್ತೆ ಮಾಡಿಕೊಡುವಂತೆ ಮನವಿ ಮಾಡಿದರು.

ಶಾಸಕರಾದ ಸಿ ಎಸ್ ನಾಡಗೌಡ ( ಅಪ್ಪಾಜಿ) ಅವರು ನಮ್ಮ ಊರಿಗೆ ಸೊಗಲಿ ಹಳ್ಕದ ಸೇತುವೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು . ಈ ಸಂದರ್ಭದಲ್ಲಿ ಶಿವಕುಮಾರ ಅರಬಿ ,ಇಸ್ಮಾಯಿಲ್ ಪಟೇಲ ಬಿರಾದಾರ,ಕಾಶೀಮ‌ ಕಾರಗಾರ,ಇನ್ನು ಹಲವರು ಉಪಸ್ಥಿತರಿದ್ದರು.

Share with Friends
author avatar
News Desk