
ನಾನು ಮಾತನಾಡಿದರೆ ವಿವಾದ ಆಗುತ್ತಿದೆ:ಬೇಸರ ಹೊರಹಾಕಿದ ನೀನಾಸಂ ಸತೀಶ್..!
ನಟ ನಿನಾಸಂ ಸತೀಶ್ಅವರು ‘ಅಯೋಗ್ಯ 2’ ಚಿತ್ರದಲ್ಲಿ ರಚಿತಾ ರಾಮ್ ಜೊತೆ ನಟಿಸಿದ್ದಾರೆ. ತಮ್ಮ ಮುಂಬರುವ ‘ಅಯೋಗ್ಯ 2’ ಕುರಿತು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅಯೋಗ್ಯ 2 ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ‘ನಾನು ಕಾಂಟ್ರವರ್ಸಿ ಮನುಷ್ಯನಲ್ಲ, ಆದರೆ ನಾನು ಮಾತನಾಡಿದರೆ ವಿವಾದಗಳು ಆಗುತ್ತಿವೆ ಎಂದು ಬೇಸರ ಹೊರಹಾಕಿದ್ದಾರೆ. ಇತ್ತೀಚೆಗೆ ಅವರು ನಿರ್ಮಾಪಕರ ಬಗ್ಗೆ ಮಾತನಾಡಿದ್ದು ಚರ್ಚೆಗೆ ಕಾರಣ ಆಗಿತ್ತು.

ಅಯೋಗ್ಯ ಚಿತ್ರದ ಮೊದಲ ಭಾಗದ ನಿರ್ಮಾಣದ ಸಮಯದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನೆದ ಸತೀಶ್ ಅಯೋಗ್ಯ 2 ನನ್ನ ಪಾಲಿಗೆ ಮತ್ತೊಂದು ಭಾವನಾತ್ಮಕ ಕ್ಷಣ. ಚಿತ್ರದ ನಿರ್ಮಾಪಕ ಮುನಿಗೌಡ್ರಿಗೆ ವಿಶೇಷ ಧನ್ಯವಾದ.ಇಷ್ಟು ದೊಡ್ಡ ಬಜೆಟ್ನ ಚಿತ್ರವನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು. ರಚಿತಾ ರಾಮ್, ರವಿಶಂಕರ್, ಸಾಧು ಕೋಕಿಲ, ಗಿರಿ, ಕೆ.ಆರ್. ಪೇಟೆ ಸೇರಿದಂತೆ ದೊಡ್ಡ ತಾರಾಬಳಗ ಇರುವ ಅಯೋಗ್ಯ 2 ಚಿತ್ರದ ನಿರ್ವಹಣೆ ಕಷ್ಟಕರ ಎಂದು ವಿವರಿಸಿದರು.
ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಅಭಿನಯದ ‘ಅಯೋಗ್ಯ 2’ ಚಿತ್ರತಂಡವು ಮಂಡ್ಯ ಸುತ್ತಮುತ್ತ ಮೊದಲ ಶೂಟಿಂಗ್ ಶೆಡ್ಯೂಲ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದೀಗ ಶುಕ್ರವಾರದಿಂದ ಎರಡನೇ ಹಂತದ ಚಿತ್ರೀಕರಣವನ್ನು ಪ್ರಾರಂಭಿಸಿದೆ.
ಇದರ ಬಗ್ಗೆ ಮಹೇಶ್ ಕುಮಾರ್ ಮಾತನಾಡಿ ಮೊದಲ ಚಿತ್ರವು (ಅಯೋಗ್ಯ) ಕೊನೆಗೊಂಡ ಸ್ಥಳದಿಂದಲೇ ಅಯೋಗ್ಯ 2 ಚಿತ್ರವು ಪ್ರಾರಂಭವಾಗುತ್ತದೆ. ಒಂದೆರಡು ಹೊಸ ಪಾತ್ರಗಳು ಚಿತ್ರತಂಡ ಸೇರಿದ್ದು, ಮುಖ್ಯ ಪಾತ್ರವರ್ಗವು ಪ್ರಯಾಣವನ್ನು ಮುಂದುವರೆಸುತ್ತದೆ. ಈಗ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಸಿದ್ಧೇಗೌಡ ಅವರು ಸಮಸ್ಯೆಗಳ ಹೊಸ ಅಲೆಯನ್ನು ಎದುರಿಸುತ್ತಿದ್ದಾರೆ. ಮೊದಲ ಚಿತ್ರದ ಸಾರವನ್ನು ಉಳಿಸಿಕೊಂಡು ಕಥೆಯು ಮುಖ್ಯ ಪಾತ್ರವು ಎದುರಿಸುತ್ತಿರುವ ಸವಾಲುಗಳನ್ನು ಅನ್ವೇಷಿಸುತ್ತದೆ. ಚಿತ್ರವು ಕನ್ನಡದಲ್ಲಿ ತಯಾರಾಗಲಿದ್ದು ನಂತರ ತೆಲುಗು ಮತ್ತು ತಮಿಳಿಗೆ ಡಬ್ಬಿಂಗ್ ಮಾಡಲಾಗುತ್ತಿದೆ ಎಂದರು.
