BlogLatestTop Storiesರಾಜ್ಯ-Karnataka

ಸ್ಫೋಟ ಪ್ರಕರಣ : ಡ್ರೋನ್ ಪ್ರತಾಪ್‌ಗೆ 10 ದಿನಗಳ ನ್ಯಾಯಾಂಗ ಬಂಧನ

ತುಮಕೂರು: ಸ್ಫೋಟಕ ವಸ್ತುವನ್ನು ನೀರಿಗೆಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕನ್ನಡದ ಬಿಗ್‌ ಬಾಸ್‌ ರಿಯಾಲಿಟಿ ಶೋ ರನ್ನರ್‌ ಅಪ್‌ ಡ್ರೋನ್ ಪ್ರತಾಪ್‌ ಗೆ ಮತ್ತೊಂದು ಶಾಕ್‌ ಎದುರಾಗಿದೆ. ಅನುಮತಿಯಿಲ್ಲದೆ ಸ್ಫೋಟಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಅವರನ್ನು ಮಧುಗಿರಿ ಜೆಎಂಎಫ್‌ಸಿ ನ್ಯಾಯಾಲಯವು ಡಿಸೆಂಬರ್ 26 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ನ್ಯಾಯಾಲಯದಿಂದ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು. ಪ್ರತಾಪ್ನನ್ನು ಕರೆದುಕೊಂಡು ಅನೇಕ ಸ್ಥಳಗಳಲ್ಲಿ ಮಹಜರು ಮಾಡಿದ್ದರು. ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಪೊಲೀಸರು ಇಂದು ಪ್ರತಾಪ್ನನ್ನು ಮಧುಗಿರಿ ಜೆಎಮ್ಎಫ್ಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ನೀಡಿದ್ದು. ಪ್ರತಾಪ್ಗೆ ಇಂದಿನಿಂದ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

ಡ್ರೋಣ್ ಪ್ರತಾಪ್ ಸ್ಫೋಟಕ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ಬಳಿ ಸ್ಫೋಟ ಮಾಡಲಾಗಿತ್ತು‌‌. ಸ್ಥಳಕ್ಕೆ ಆಗಮಿಸಿದ ಫೊರೆನ್ಸಿಕ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸರ್ವೆ ನಂ 66/3, ಜಮೀನಿಲ್ಲಿ ಕೃಷಿ ಹೊಂಡ ಇದ್ದು ಅಲ್ಲಿಯೇ ಘಟನೆ ನಡೆದಿದೆ. ಹಾಗಾಗಿ ಕೃಷಿ ಹೊಂಡ ಇರುವಂತಹ ಜಮೀನಿನ ಮಾಲೀಕ ಜಿತೇಂದ್ರಜೈನ್ ಮೇಲೂ ಎಫ್ಐಆರ್ ಆಗಿದೆ.

Share with Friends
author avatar
News Desk