BlogHealth | ಆರೋಗ್ಯಬೆಂಗಳೂರು-Bengaluruರಾಜ್ಯ-Karnataka

ಹೃದಯ ಸಂಬಂಧಿ ಕಾಯಿಲೆ ಇರೋರಿಗೆ ಗುಡ್ ನ್ಯೂಸ್

ಬೆಂಗಳೂರು : ಹೃದಯ ಸಂಬಂಧಿ ಕಾಯಿಲೆ ಇರೋ ರೋಗಿಗಳಿಗೆ ಗುಡ್ ನ್ಯೂಸ್, ಜಯದೇವ ಹೃದ್ರೋಗ ಸಂಸ್ಥೆ ಇನ್ಮುಂದೆ 24 ಗಂಟೆ ತೆರೆದಿರಲಿದೆ. ಜಯದೇವ ಹಾಗೂ ಕೆ.ಜಿ.ಜನರಲ್ ಆಸ್ಪತ್ರೆಯ ಜಯದೇವ ಘಟಕ ದಿನದ 24 ಗಂಟೆಯೂ ಓಪನ್ ಆಗಿರಲಿದೆ.

ರಾಜ್ಯದಲ್ಲಿ ಹೃದಯಘಾತಕ್ಕೆ ಸಾವಿರಾರೂ ಜನರು ಬಲಿಯಾಗುತ್ತಿದ್ದು, ಸಂಜೆ ಬಳಿಕ ಹೃದಯ ಸಮಸ್ಯೆ ಅಂತಾ ಬಂದ್ರೆ ಚಿಕಿತ್ಸೆ ಸಿಗುತ್ತಿರಲಿಲ್ಲ, 4 ಗಂಟೆಯ ಬಳಿಕ ತುರ್ತು ಎಮೆರ್ಜನ್ಸಿ ಚಿಕಿತ್ಸೆಗೆ ವೈದ್ಯರುಗಳು ಇರುತ್ತಿರಲಿಲ್ಲ.

ಆಸ್ಪತ್ರೆಯನ್ನ 24 ಗಂಟೆ ರಾತ್ರಿ ವೇಳಯ ಅವಧಿಯಲ್ಲಿ ಚಿಕಿತ್ಸೆ ನೀಡುವಂತೆ ಜನರಿಂದ ಅನೇಕ ಮನವಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ 24 ಗಂಟೆ ಜಯದೇವ ಆಸ್ಪತ್ರೆ ತೆರೆದಿರುವಂತೆ ಸಿಎಂ ತಾಕೀತು ಮಾಡಿದ್ದರು. ಯದೇವ ಆಸ್ಪತ್ರೆ ಮತ್ತು ಅದರ ಘಟಕಗಳು 24 ಗಂಟೆ ಕಾರ್ಯ ನಿರ್ವಹಿಸಲು ಸಿಎಂ ಸೂಚನೆ ನೀಡಿದ್ದಾರೆ.

Share with Friends
author avatar
News Desk