Crime NewsLatestಕೊಡಗು-Kodaguಚುನಾವಣೆ-Electionರಾಜ್ಯ-Karnataka

ಪ್ರಚಾರದ ವೇಳೆ ಹಿಟ್‌ & ರನ್ – ಸ್ಥಳದಲ್ಲೇ ಬಿಜೆಪಿ ಕಾರ್ಯಕರ್ತ ಸಾವು

ಕೊಡಗು: ಬಿಜೆಪಿ (BJP) ಪ್ರಚಾರದ ವೇಳೆ ಕಾರ್ಯಕರ್ತನೋರ್ವನಿಗೆ ಕಾರು ಅಪಘಾತವಾದ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ನೆಲೈಹುದಿಕೇರಿಯಲ್ಲಿ ನಡೆದಿದೆ.

ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತ ರಾಮಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಮಪ್ಪ ನವರು ಬಿಜೆಪಿ ಪರವಾಗಿ ಮನೆ ಮನೆ ಪ್ರಚಾರ ಮಾಡಿ ಹಿಂದಿರುಗುವಾಗ ಘಟನೆ ಸಂಭವಿಸಿದೆ. ಹಾಗೆ ಜೊತೆಗಿದ್ದ ರತೀಶ್ ಹಾಗೂ ಚಿನ್ನರಾಜ್ ಎಂಬ ಇಬ್ಬರಿಗೆ ಗಾಯವಾಗಿದ್ದು, ಗಯಾಳುಗಳನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ವಿದ್ಯಾರ್ಥಿನಿ ನೇಹಾ ಕೊಲೆಗೆ ಕಾರಣ ತಿಳಿಸಿದ ಪರಮೇಶ್ವರ್

https://youtu.be/RLABPlUFGgU?si=3rOoSPEp0iNc4z3L

ಈ ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದ್ದು, ಓರ್ವ ಯುವಕನ ಬಂಧನವಾಗಿದೆ. ಇದನ್ನೂ ಓದಿ: ಕೀನ್ಯದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನ: ಘಟನೆಯಲ್ಲಿ ಸೇನಾ ಮುಖ್ಯಸ್ಥ ಸೇರಿ ಯೋಧರು ಸಾವು

Share with Friends
author avatar
News Desk