Latestಉಡುಪಿ-Udupiಜಿಲ್ಲಾ ಸುದ್ದಿಗಳು | District Newsರಾಜ್ಯ-Karnataka

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಭೇಟಿ

ಉಡುಪಿ, ಜೂ. 13: ಕೇಂದ್ರ ವಿತ್ತ ಸಚಿವೆ Nirmala Sitharaman ಅವರು ಶುಕ್ರವಾರ ಬೆಳಗ್ಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.

ಈ ವೇಳೆ ಪರ್ಯಾಯ ಶೀರೂರು ಮಠಾಧೀಶರಾದ Sri Vedavardhana Teertha Sripadaru ಅವರಿಂದ ಫಲ-ಮಂತ್ರಾಕ್ಷತೆ ಸ್ವೀಕರಿಸಿದ ಸಚಿವೆ, ಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಬಳಿಕ ಕೃಷ್ಣ ಮಠದಲ್ಲಿ ದೇವರ ನೈವೇದ್ಯ ತಯಾರಿಕೆಗೆ ಹೊಸದಾಗಿ ನಿರ್ಮಿಸಲಾಗಿರುವ ಅಡುಗೆ ಕೋಣೆ (ಪಾಯದ ಕೋಣೆ)ಯನ್ನು ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು. ಈ ಮೂಲಕ ಮಠದ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಸೇರ್ಪಡೆ ನಡೆದಿದೆ.

ಕಾರ್ಯಕ್ರಮದಲ್ಲಿ ಶಿರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು, Yashpal Suvarna, Gurme Suresh Shetty ಹಾಗೂ ಮಧುಕರ್ ಮುದ್ರಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

Share with Friends
author avatar
News Desk