Blogಬೆಳಗಾವಿ-Belagaviರಾಜ್ಯ-Karnataka

ಅಮಿತ್ ಷಾ ಹೇಳಿಕೆ ಖಂಡಿಸಿ ಅಥಣಿ ಬಂದ್ ಮಾಡಿ ಪ್ರತಿಭಟನೆ

ಚಿಕ್ಕೋಡಿ : ಅಮಿತ್ ಷಾ ಹೇಳಿಕೆ ಖಂಡಿಸಿ ಅಥಣಿಯಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ಪ್ರತಿಭಟನೆಗೆ ನಡೆಸಲಾಯಿತು.

ಶಾಲಾ ಕಾಲೇಜು,ಮೆಡಿಕಲ್ ಮತ್ತು ಆಸ್ಪತ್ರೆಯಗಳನ್ನ ಹೊರತು ಪಡಿಸಿ ಉಳಿದ ಅಂಗಡಿಗಳು ಬಂದ್ ಆಗಿದ್ದವು.ವಿಜಯಪುರ- ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಯಿತು. ಅಮಿತ್ ಷಾ ಪ್ರತಿಕೃತಿ ಗೆ ಚಪ್ಪಲಿ‌ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.

ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ :
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿ ಪಟ್ಟಣದಲಿ ದಲಿತ ಹಾಗೂ ಪ್ರಗತಿಪರ ಎಲ್ಲ ಸಮುದಾಯದ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿದವು. ಟಯರ್ ಗೆ ಬೆಂಕಿ ಹಚ್ಚಿ ಕೈಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಮಾನವ ಸರಪಳಿ ನಿರ್ಮಿಸಿ ಜತ್ತ ಜಾಬೋಟ್ಟಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಲಾಯಿತು.

ಅಮಿತ್ ಶಾ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು ಗೃಹ ಸಚಿವ ಅಮಿತ ಶಾ ಅವರು ಕ್ಷಮೆ ಯಾಚಿಸುವಂತೆ ಮತ್ತು ತಕ್ಷಣವೇ ಅವರನ್ನು ಗೃಹ ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹಿಸಿದರು. ಪ್ರತಿಭಟನೆಗೆ ದಲಿತ ಸಂಘಟನೆಗೆ ಸಾತ್ ಎಲ್ಲಾ ಸಮುದಾಯದವರು ಹಾಗೂ ಮಹಿಳೆಯರು ಕುಡಾ ಸಾಥ್ ನೀಡಿದರು.

ವರದಿ : ಎಂ. ಕೆ. ಸಪ್ತಸಾಗರ

Share with Friends
author avatar
News Desk