Latestಚಿಕ್ಕಬಳ್ಳಾಪುರ-Chikkaballapuraಚುನಾವಣೆ-Electionರಾಜಕೀಯ | Politicsರಾಜ್ಯ-Karnataka

ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆಗೆ ಒತ್ತಾಯ

ಚಿಕ್ಕಬಳ್ಳಾಪುರ: ಲೊಕಸಭಾ ಚುನಾವಣೆಯ ಫಲಿತಾಂಶದ ನಡುವೆ ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ರಾಜೀನಾಮೆಗೆ (Resignation) ಒತ್ತಾಯ ಕೇಳಿ ಬರುತ್ತಿದೆ.

ಸದ್ಯ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ (K sudhakar) ಅವರು ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ (Raksha Ramaiah) ಅವರಿಂದ ಸುಮಾರು 7,2180 ಅಂತರಗಳಿಂದ ಮುನ್ನಡೆ ಸಾಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರದೀಪ್‌ ಈಶ್ವರ್‌ ರಾಜೀನಾಮೆ ನೀಡುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಗುಜುರಾತ್‌ನ ಗಾಂಧಿನಗರದಲ್ಲಿ ಗೆಲುವು ಸಾಧಿಸಿದ ಅಮಿತ್ ಶಾ

https://youtu.be/lc15CaHVVn4?si=LY5hvhP1eazRYC01

ಈ ಹಿಂದೆ ಕೆ ಸುಧಾಕರ್‌ ವಿರುದ್ಧ ಸವಾಲೆಸೆದಿದ್ದ ಪ್ರದೀಪ್‌ ಈಶ್ವರ್‌, ಒಂದು ವೋಟ್‌ ಲೀಡ್‌ ಬಂದರೂ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಹೀಗಾಗಿ ಇದೀಗ ಸುಧಾಕರ್‌ ಅವರು ಮುನ್ನಡೆ ಕಾಯ್ದುಕೊಳ್ಳುತ್ತಿದ್ದು, ಇಂದೇ ಪ್ರದೀಪ್‌ ಈಶ್ವರ್‌ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿಯವರು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: Election Results: ಲೀಡ್ ಬರುತ್ತಿದ್ದಂತೆ ನಾಮಫಲಕಕ್ಕೆ ಯದುವೀರ್ ಪೂಜೆ

https://youtu.be/kbC5xGOUZd0?si=8IHEjwO7985SeV8P
Share with Friends
author avatar
News Desk