Latestವಿಜಯಪುರ-Vijayapura

ಅಪಾಯದ ಅಂಚಿನಲ್ಲಿ ನಿಡಗುಂದಿಯ ಬುದ್ನಿ ಸರ್ಕಾರಿ ಶಾಲೆ..!

ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಬುದ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ತೀರ ಶೋಚನೀಯವಾಗಿದ್ದು, ಕಟ್ಟಡವು ಸಂಪೂರ್ಣವಾಗಿ ಅಪಾಯದ ಅಂಚಿನಲ್ಲಿದೆ.

ಸೋರುತ್ತಿರುವ ಮಾಳಿಗೆ: ಮಳೆ ಬಂದರೆ ಸಾಕು ಶಾಲೆಯ ಮೇಲ್ಚಾವಣಿಯಿಂದ ಧಾರೆಧಾರೆಯಾಗಿ ನೀರು ಹರಿಯುತ್ತದೆ.

ಮೂಲಭೂತ ಸೌಕರ್ಯಗಳ ಅಭಾವ: 1968ರಲ್ಲಿ ಪ್ರಾರಂಭವಾದ ಈ ಶಾಲೆಗೆ ಬರೋಬ್ಬರಿ 57 ವರ್ಷಗಳ ಇತಿಹಾಸವಿದ್ದರೂ, ಇಂದಿಗೂ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತವಾಗಿದೆ.

ಅಪಾಯದ ಅಂಚಿನಲ್ಲಿ ನಿಡಗುಂದಿಯ ಬುದ್ನಿ ಸರ್ಕಾರಿ ಶಾಲೆ

ಕೊಠಡಿಗಳ ಅಭಾವ: ಶಾಲೆಯಲ್ಲಿ 108 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಕುಳಿತುಕೊಳ್ಳಲು ಸರಿಯಾದ ಕೊಠಡಿಗಳಿಲ್ಲ. ಹೀಗಾಗಿ ಮುಖ್ಯೋಪಾಧ್ಯಾಯರ (HM) ಕೋಣೆಯನ್ನೇ ತರಗತಿಯನ್ನಾಗಿ ಮಾರ್ಪಡಿಸಿಕೊಂಡು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊರ ಅಂಗಳದಲ್ಲಿ ಪಾಠ: ಮಳೆಯಾದಾಗ ಕೊಠಡಿಯೊಳಗೆ ನೀರು ನಿಲ್ಲುವುದರಿಂದ, ಮಕ್ಕಳು ಅನಿವಾರ್ಯವಾಗಿ ಶಾಲೆಯ ಹೊರ ಅಂಗಳದಲ್ಲೇ ಕುಳಿತು ವಿದ್ಯಾಭ್ಯಾಸ ಮಾಡುವಂತಾಗಿದೆ.

ಸಾರ್ವಜನಿಕರ ಹಾಗೂ ಪೋಷಕರ ಆಕ್ರೋಶ: ಹಲವಾರು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗಿಲ್ಲ. ಶಿಕ್ಷಣ ಸಚಿವರೇ, ಸರ್ಕಾರಿ ಶಾಲೆಗಳ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ಒಮ್ಮೆ ಪ್ರತ್ಯಕ್ಷವಾಗಿ ಬಂದು ಗಮನಿಸಿ..!

Share with Friends
author avatar
Digital Desk