Blogಚಿತ್ರದುರ್ಗ-Chitradurgaರಾಜ್ಯ-Karnataka

ಕೋರ್ಟ್‌ನಲ್ಲಿ ಕಿಟಕಿ ಗ್ಲಾಸ್ ಒಡೆದು ರಂಪಾಟ ಮಾಡಿದ ಆರೋಪಿ

ಚಿತ್ರದುರ್ಗ : ಇಲ್ಲಿನ ಜಿಲ್ಲಾ ಕೋರ್ಟ್ ನಲ್ಲಿ ಕಿಟಕಿಯ ಗ್ಲಾಸ್ ಗೆ ಕೈನಿಂದ ಗುದ್ದಿ, ರಂಪಾಟ ಮಾಡಿರುವ ಘಟನೆ ಜರುಗಿದೆ.ಆರೋಪಿ ಸಮ್ಮು ಅಲಿಯಾಸ್ ಬಷೀರ್ ಎಂಬಾತನಿಂದ ಈ ಕೃತ್ಯ ನಡೆಸಲಾಗಿದ್ದು, ವಿಚಾರಣೆಗೆಂದು ಕೋರ್ಟ್ ಗೆ ಕರೆತರಲಾಗಿತ್ತು.

ಈ ವೇಳೆ ಕ್ಷುಲ್ಲಕ ವಿಷಯಕ್ಕೆ ಕೋರ್ಟ್ ಕಾರಿಡಾರ್ ನಲ್ಲಿದ್ದ ಕಿಟಕಿಯ ಗ್ಲಾಸ್ ಗೆ ಕೈನಿಂದ ಗುದ್ದಿದ್ದಾನೆ. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಪೇದೆಗಳ ಮೇಲೂ ಕೂಡಾ ಹಲ್ಲೆಗೆ ಮುಂದಾಗಿದ್ದಾನೆ. ಇದೇ ಸಂದರ್ಭದಲ್ಲಿ ಕೂಡಲೇ ಎಚ್ಚತ್ತ ಪೊಲೀಸರು ಆತನಿಂದ ಗ್ಲಾಸ್ ಕಸಿದುಕೊಂಡು ರಕ್ಷಣೆ ಮಾಡಿದ್ದಾರೆ.

Share with Friends
author avatar
News Desk