Crime NewsLatestಬೆಂಗಳೂರು-Bengaluruರಾಜ್ಯ-Karnataka

A2 ಆರೋಪಿ ರೇವಣ್ಣ ಬಂಧನ ಅನುಮಾನಾಸ್ಪದಾ

ಬೆಂಗಳೂರು: ಸಂತ್ರಸ್ತೆಯ ಅಪಹರಣ (Kidnap Case) ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ, ಮಾಜಿ ಸಚಿವ ಹೆಚ್‌ಡಿ ರೇವಣ್ಣಗೆ (HD.Revanna) ಸೋಮವಾರ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿದೆ. ಕೋರ್ಟ್ ಜಾಮೀನು ಮಂಜೂರು ಮಾಡುವ ನಿರ್ಧಾರಕ್ಕೆ ಬಂದಿದ್ದು ಯಾಕೆ ಎನ್ನುವುದನ್ನು ಕೋರ್ಟ್ ತನ್ನ ಆದೇಶದಲ್ಲಿ ಹಲವು ಕಾರಣಗಳನ್ನು ನೀಡಿದೆ.

ಮೊದಲಿಗೆ ಮಹಿಳೆಗೆ ಆರೋಪಿಯಿಂದ ತೊಂದರೆಯಿದೆ, ಜೀವ ಭಯ ಇದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಗಳು ಇಲ್ಲ. ಪ್ರಕರಣ ದಾಖಲಾಗುವ ಮೊದಲೇ ಎ2 ಆರೋಪಿ ಸತೀಶ್ ಬಾಬುವನ್ನು ವಶಕ್ಕೆ ಪಡೆದಿದ್ದು ಅನುಮಾನಸ್ಪದವಾಗಿದೆ. ಐಪಿಸಿ ಸೆಕ್ಷನ್ 364 ಎ (ಬೆದರಿಸಿ ಅಪಹರಣ) ಅನ್ವಯವಾಗುವ ಪೂರಕವಾದ ಯಾವುದೇ ಸಾಕ್ಷಿಗಳು ಇಲ್ಲ. ಇದನ್ನೂ ಓದಿ: ದಿನೇ ದಿನೇ ಹೆಚ್ಚಾಗುತಿದೆ ಡೆಂಗ್ಯೂ ಪ್ರಕರಣಗಳು

ಸಂತ್ರಸ್ತೆಯ 164 ಹೇಳಿಕೆಯನ್ನು ಪಡೆಯಬೇಕಿದೆ ಎಂದು ಆರೋಪಿಯ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಆದರೆ 161 ಹೇಳಿಕೆಯನ್ನು ಯಾವಾಗ ದಾಖಲು ಮಾಡಿದ್ದಾರೆ ಎಂದು ಉಲ್ಲೇಖ ಮಾಡಿಲ್ಲ. ಸಂತ್ರಸ್ತೆ ಪೊಲೀಸರಿಗೆ ನಿಡಿದ್ದ ಹೇಳಿಕೆ ಪ್ರಕಾರ ರೇವಣ್ಣನ ಮಗನಾದ ಪ್ರಜ್ವಲ್ ರೇವಣ್ಣ ವಿರುದ್ಧ ಮಾತ್ರವೇ ಅತ್ಯಾಚಾರದ ಆರೋಪಗಳು ಮಾತ್ರ ನಮೂದಾಗಿದೆ. ಆದರೆ ಇದರಲ್ಲಿ ರೇವಣ್ಣ ಅಪಹರಣ ಮಾಡಿದ್ದಕ್ಕೆ ಹೇಳಿಕೆ ಉಲ್ಲೇಖ ಮಾಡಿಲ್ಲ. ಇದನ್ನೂ ಓದಿ: ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದ ಸುಂದರ್ ಅಂದರ್

https://youtu.be/am20I7-S2dU?si=3szi5iQ3QG_XyyGv

ಸಂತ್ರಸ್ತೆಯ 164 ಹೇಳಿಕೆ ದಾಖಲು ಮಾಡಲು ತಡವಾಗಿದ್ದು ಯಾಕೆ ಎಂಬುದನ್ನು ತಿಳಿಸಲು ಎಸ್‌ಐಟಿ ಸಫಲವಾಗಿಲ್ಲ. ಸಂತ್ರಸ್ತ ಮಹಿಳೆಗೆ ಜೀವ ಬೆದರಿಕೆ ಅಥವಾ ಯಾವುದೇ ಬೇಡಿಕೆ ಕೇಳಿರುವುದಕ್ಕೆ ಪೂರಕ ಸಾಕ್ಷ್ಯಗಳು ಇಲ್ಲ. ಇಡೀ ಪ್ರಕರಣದಲ್ಲಿ 364 ಎ ಅಳವಡಿಕೆಗೆ ಪೂರಕವಾದ ಸಾಕ್ಷ್ಯಗಳು ಇಲ್ಲ. ಮಗನನ್ನು ರಕ್ಷಣೆ ಮಾಡಿದ್ದಾರೆ. ಅದಕ್ಕೆ ಈ ಕೃತ್ಯವನ್ನು ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯಗಳನ್ನು ಎಸ್‌ಐಟಿ ಒದಗಿಸಿಲ್ಲ. ಇದನ್ನೂ ಓದಿ: ಹೃದಯ ಕಾಯಿಲೆಯಿಂದ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲು

https://youtu.be/lwT9p6w4n0U?si=iKed2KiejQKIiY5X

2019 ರ ಚುನಾವಣಾ ಅಕ್ರಮದ ಬಗ್ಗೆ ಇಲ್ಲಿ ಉಲ್ಲೇಖಸಿದ್ದಾರೆ. ಆದರೆ ಆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ನಿಂದ ತಡೆಯಾಜ್ಞೆ ಇದೆ ಹೀಗಾಗಿ ಆ ವಿಚಾರ ಮಾನ್ಯ ಮಾಡಲು ಸಾಧ್ಯವಿಲ್ಲ. ಇಲ್ಲಿ ಗಂಭೀರವಾದ ಆರೋಪ ಇರುವುದು ಪ್ರಜ್ವಲ್ ರೇವಣ್ಣ ಮೇಲೆ ಹೊರತು ರೇವಣ್ಣ ಮೇಲೆ ಅಲ್ಲ. ಇದನ್ನೂ ಓದಿ: ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ, ಮೂವರು ಅಪ್ರಾಪ್ತರು ಸೇರಿ 6 ಮಂದಿ ಬಂಧನ

Share with Friends
author avatar
News Desk