ಹೆಂಡತಿಯ ಬರ್ಬರ ಹತ್ಯೆ, ಜಗಳ ಬಿಡಿಸಲು ಬಂದ ಅತ್ತೆಯೂ ಗಂಭೀರ
ವಿಜಯಪುರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಗಂಡ ತನ್ನ ಹೆಂಡತಿಯನ್ನು ಹೊಲದಲ್ಲಿ ಭೀಕರ ಹತ್ಯೆ ಮಾಡಿರುವ ಘಟನೆ ಜೆಲ್ಲೆಯ ಬಬಲೇಶ್ವರ ತಾಲೂಕಿನ ಗ್ರಾಮದಲ್ಲಿ ನಡೆದಿದೆ.
ಕಂಬಾಗಿ ಗ್ರಾಮದ ಯಲ್ಲವ್ವ ಗಳವೆ(36) ಕೊಲೆಯಾಗಿರುವ ಮಹಿಳೆ. ತನ್ನ ಹೆಂಡತಿ ಬೇರೆ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಕೊಪಗೊಂಡ ಆರೋಪಿ ಸಾಬು ಗಳವೆ ಪತ್ನಿ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ಕಾರು ಅಪಘಾತ ಪ್ರಕರಣದಲ್ಲಿ ಇಬ್ಬರು ಚಾಲಕರ ಮೇಲೆ FIR
ಇದೇ ವೇಳೆ ಜಗಳ ಬಿಡಿಸಲೆಂದು ಅತ್ತೆ ಸೌರವ್ವ ಬಂದಿದ್ದಾರೆ. ಅವರ ಮೇಲೂ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅತ್ತೆಯನ್ನು ಜೆಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಹೆತ್ತ ಮಕ್ಕಳನೇ ಕೊಲೆ ಮಾಡಿದ ಪಾಪಿ ತಾಯಿ
ಬಬಲೇಶ್ವರ ಪೊಲೀಸ್ ಠಾಣಾ ವ್ತಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ:ಹೆತ್ತ ಮಕ್ಕಳನೇ ಕೊಲೆ ಮಾಡಿದ ಪಾಪಿ ತಾಯಿ
