Crime NewsLatestರಾಷ್ಟ್ರೀಯ-National

ಕೇಸರಿ ಕಿಚ್ಚು, ತೆರೇಸಾ ಶಾಲೆ ವಿರುದ್ಧ ದಂಗೆ ಎದ್ದ ಹಿಂದೂ ಸಂಘಟನೆ

ಮಂಚೇರಿಯಲ್: ಶಾಲೆಗೆ (School) ವಿದ್ಯಾರ್ಥಿಗಳು(Students) ಹನುಮಾನ್ ದೀಕ್ಷೆ ಉಡುಗೆ ಧರಿಸಿ ತರಗತಿಗೆ ಬಂದಿರುವುದನ್ನು ಶಿಕ್ಷಕರು ವಿರೋಧಿಸಿರುವ ಘಟನೆ ತೆಲಂಗಾಣದ (Telangana) ಮಂಚೇರಿಯಲ್ ಜಿಲ್ಲೆಯ ತೆರೇಸಾ ಶಾಲೆಯಲ್ಲಿ ನಡೆದಿದೆ.

ಮದರ್ ತೆರೇಸಾ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನು ಹನುಮಾನ್ ದೀಕ್ಷೆ ಉಡುಗೆ ಹಾಕಿಕೊಂಡು ಬಂದಿರುವುದಕ್ಕೆ ತರಗತಿಯೊಳಗೆ ಪ್ರವೇಶವಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಎಂದು ತರಗತಿಯಿಂದ ಹೊರ ಕಳುಹಿಸಿದ್ದಾರೆ. ಇದನ್ನೂ ಓದಿ:  ಮಂಡ್ಯಕ್ಕೆ ಕೈ ನಾಯಕ ರಾಹುಲ್ ಎಂಟ್ರಿ, ಇಂಚಿಂಚೂ ಹೆಲಿಕಾಪ್ಟರ್ ಚೆಕ್ಕಿಂಗ್

https://youtu.be/n6TR5sFjO68?si=HxJrGP1rqg3WkHMU

ಇದಕ್ಕೆ ಪೋಷಕರು ದೂರು ನೀಡಿದ್ದು, ಶಾಲಾ ಪ್ರಂಶುಪಾಲತರು ಮತ್ತು ಶಾಲಾ ಶಿಕ್ಷಕರ ವಿರುದ್ಧ ಸೆಕ್ಷನ್ 153 (ಎ) ಧರ್ಮ ಅಥವಾ ಜನಾಂಗದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೆಜಿಸುವುದು ಮತ್ತು 295 (ಎ) ಧಾರ್ಮಿಕ ಅವಮಾನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಸರ್ಕಾರಿ ಬಸ್‌ನಲ್ಲಿ ಬಿಕಿನಿ ತೊಟ್ಟು ಸಂಚರಿಸಿದ ಮಹಿಳೆ

ಸಮವಸ್ತ್ರ ಧರಿಸದೇ ಬರದ ವಿದ್ಯರ್ಥೀಗಳು ಶಾಲೆ ಪ್ರವೇಶಿಸುವಂತಿಲ್ಲ ಹಾಗೂ ವಾರ್ಷಿಕ ಪರೀಕ್ಷೆಗೆ ಹಾಜರಾಗದಂತೆ ಆಡಳಿತ ಮಂಡಳಿ ಹೇಳಿತ್ತು. ಇದನ್ನೂ ಓದಿ: ಪಕ್ಕದ ಮನೆಗೆ ಕನ್ನ ಹಾಕಿದ್ದ ಯುವತಿಗೆ ಸ್ನೇಹಿತನ ಸಾಥ್ – ಇಬ್ಬರನ್ನು ಬಂಧಿಸಿದ ಪೊಲೀಸರು

https://youtu.be/GpS2c14GVR0?si=KU7-MJVTFUn3JrZN

ಇದರಿಂದ ಅಕ್ರೋಶಗೊಂಡು ಶಾಲೆ ಹೊರಗೆ ಪ್ರತಿಭಟನೆ ಮಾಡುತ್ತಿದ್ದ ಹಿಂದೂ ಸಂಘಟನೆ ಸದಸ್ಯರು ಶಾಲೆಯೊಳಗೆ ನುಗ್ಗಿ ಶಾಲೆಯ ಕಿಟಕಿಗಳನ್ನು ಧ್ವಂಸಗೊಳಿಸಿದ್ದಾರೆ. ಶಾಲೆ ಅನೇಕ ವಸ್ತುಗಳು ಮುರಿದು ಹಾಕಿದ್ದಾರೆ. ಶಾಲೆಯ ಆಡಳಿತ ಮಂಡಳಿ ಸ್ಥಳೀಯ ಪೊಲೀಸರಿಗೆ ಈ ಘಟನೆಯ ಬಗ್ಗೆ ದೂರು ನೀಡಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಐಸ್‌ಕ್ರೀಂ ತಿಂದು ಅವಳಿ ಮಕ್ಕಳ ಅನುಮಾನಾಸ್ಪದ ಸಾವು


Share with Friends
author avatar
News Desk