BlogLatestರಾಜ್ಯ-Karnataka

ಬಳ್ಳಾರಿ ಜೈಲಲ್ಲಿರುವ ದರ್ಶನ್‌ಗೆ ಸಿಕ್ತು ಸರ್ಜಿಕಲ್‌ ಚೇರ್‌

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ಅವರಿಗೆ ಸರ್ಜಿಕಲ್‌ ಚೇರ್‌ ನೀಡಲಾಗಿದೆ. ದರ್ಶನ್‌ಗೆ ಸರ್ಜಿಕಲ್‌ ಚೇರಿನ ಅಗತ್ಯವಿದೆ ಎಂದು ಆತನ ಪತ್ನಿ ವಿಜಯಲಕ್ಷ್ಮೀ ಅವರು ವೈದ್ಯಕೀಯ ವರದಿ ನೀಡಿದ್ದರೂ, ಅದನ್ನು ಜೈಲಾಧಿಕಾರಿ ಒಪ್ಪಿರಲಿಲ್ಲ.

ದರ್ಶನ್‌ ವೈದ್ಯಕೀಯ ವರದಿ ಬಂದ ನಂತರವೇ ಸರ್ಜಿಕಲ್‌ ಚೇರ್‌ ನೀಡುವುದಾಗಿ ಹೇಳಿದ್ದರು. ಅದರಂತೆ, ಬಳ್ಳಾರಿ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್‌ ಗೆ ಸರ್ಜಿಕಲ್‌ ಚೇರ್‌ ನೀಡಲಾಗಿದೆ. ಆರೋಪಿ ದರ್ಶನ್‌ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ದರ್ಶನ್​ ಕುಟುಂಬಸ್ಥರು ನೀಡಿದ ವರದಿ ಹಾಗೂ ಪರಪ್ಪನ ಅಗ್ರಹಾರ ಜೈಲಿನಿಂದ ಕೊಟ್ಟ ವರದಿಯನ್ನೂ ಪರಿಶೀಲಿಸಿದ ಬಳಿಕ ನಟನಿಗೆ ಸರ್ಜಿಕಲ್​ ನೀಡಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ದರ್ಶನ್​ಗೆ ಸರ್ಜಿಕಲ್​ ಚೇರ್​ ನೀಡಲಾಗುತ್ತಿದೆ.

ಪರಪ್ಪನ ಅಗ್ರಹಾರದಲ್ಲಿ ಇದ್ದಾಗ ದರ್ಶನ್​ ವಿವಿಧ ಸವಲತ್ತುಗಳನ್ನು ಪಡೆದುಕೊಂಡಿದ್ದರು. ತಮ್ಮ ಪ್ರಭಾವ ಬಳಸಿ ವಿಐಪಿ ಟ್ರೀಟ್​ಮೆಂಟ್​ ಪಡೆದುಕೊಂಡರು. ಅದಕ್ಕೆ ಸಾಕ್ಷಿ ಎಂಬಂತೆ ಫೋಟೋ ಮತ್ತು ವಿಡಿಯೋಗಳು ವೈರಲ್​ ಆದವು. ಆ ಬಳಿಕ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಶಿಫ್ಟ್​ ಮಾಡಲಾಗಿದೆ.

Share with Friends
author avatar
News Desk