Latestಚುನಾವಣೆ-Electionಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಪ್ರಧಾನಿ ಏ.28,29 ಕ್ಕೆ ರಾಜ್ಯಕ್ಕೆ – ಉತ್ತರ ಕರ್ನಾಟಕದಲ್ಲಿ ಮತಯಾಚನೆ

ಬೆಂಗಳೂರು: ಲೋಕಸಭಾ ಚುನಾವಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಮತ್ತು ಸೋಂವಾರ ಕರ್ನಾಟಕಕ್ಕೆ (Karnataka) ಮತ್ತೆ ಪ್ರವಾಸ ಮಾಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು ಎರಡು (Two) ದಿನಗಳ ಕಾಲ ಅವರು ರಾಜ್ಯದಲ್ಲಿ ಪ್ರಚಾರ ಮಾಡಲಿದ್ದಾರೆ. ಈ ವೇಳೆ ಅವರು ಐದು ಜೆಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

https://youtu.be/RFhW_rHRcB0?si=Az3xV3x7Rec0nM2C

ರಾಜ್ಯದಲ್ಲಿ ಸಂಚರಿಸಲಿರುವ ನರೇಂದ್ರ ಮೊಧಿ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ನಾಳೆ ದಾವಣಗೆರೆ, ಉತ್ತರ ಕನ್ನಡ ಮತ್ತು ಬೆಳಾವಿಯಲ್ಲಿ ಬಹಿರಂಗ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಂದು ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿದ್ದು, ಮರು ದಿನ ಕಲಬುರಗಿ, ಬಳ್ಳಾರಿ, ರಾಯಚೂರು, ಕೊಪ್ಪಳದಲ್ಲಿ ಆಯೋಜಿಸುವ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಎರಡನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಎರಡು ದಿನಗಳಲ್ಲಿ ಆ ಕ್ಷೇತ್ರಗಳ ಅಭ್ಯರ್ಥಿಗಳ ಪರ 6 ರ್ಯಾಲಿ ನಡೆಸಲಿದ್ದಾರೆ. ಮೋದಿಯ ಎರಡು ದಿನದ ಪ್ರಚಾರ ರಾಜ್ಯ ನಾಯಕರಲ್ಲಿ ಶಕ್ತಿ ತುಂಬಲಿದೆ. ಮೋದಿ ಆಗಮನ ಹಿನ್ನೆಲೆಯಲ್ಲಿ ಕೇಸರಿ ಕಲಿಗಳಲ್ಲಿ ರಣೋತ್ಸಾಹ ತುಂಬಿದೆ.

ಮೋದಿ ಕಾರ್ಯಕ್ರಮ ಎಲ್ಲಿಲ್ಲಿ..?
ಏಪ್ರಿಲ್ 28:

  • ಬೆಳಗಾವಿ ಸಮಾವೇಶ (ಬೆಳಗ್ಗೆ 11 ಗಂಟೆಗೆ)
  • ಶಿರಸಿಯಲ್ಲಿ ಸಮಾವೇಶ (ಮಧ್ಯಾಹ್ನ 01 ಗಂಟೆಗೆ)
  • ದಾವಣಗೆರೆ ಸಮಾವೇಶ (ಮಧ್ಯಾಹ್ನ 03 ಗಂಟೆಗೆ)
  • ಹೊಸಪೇಟೆ ಸಮಾವೇಶ (ಸಂಜೆ 5 ಗಂಟೆಗೆ)
https://youtu.be/DbyxeBZAkXM?si=JNke0Gitbewq7VKT

ಏಪ್ರಿಲ್ 29

  • ಬಾಗಲಕೋಟೆ ಸಮಾವೇಶ (ಮಧ್ಯಾಹ್ನ 12.15 ಗಂಟೆಗೆ)

ಪಂಚ ಸಮಾವೇಶಗಳಲ್ಲೂ ರಾಜ್ಯ ಕಾಂಗ್ರೆಸ್ ವೈಫಲ್ಯಗಳೇ ಮೋದಿ ಬ್ರಹ್ಮಾಸ್ತ್ರಗಳಾಗಿವೆ. ಬೆಳಗಾವಿಯಲ್ಲಿ ಮೋದಿ ಒಂದು ದಿನ ವಾಸ್ತವ್ಯ ಹೂಡುವ ಮೂಲಕ ಇಲ್ಲಿಂದಲೇ ಉತ್ತರ ಕರ್ನಾಟಕ ಭಾಗದ ಚುನಾವಣೆ ರಣತಂತ್ರ ಹೆಣೆಯಲಿದ್ದಾರೆ. ಈ ಭಾಗದ ಲೋಕಸಭಾ ಕ್ಷೇತ್ರಗಳ ಚುನಾವಣಾ ರಣಕಹಳೆ ಮೊಳಗಿಸಲು ಮೋದಿ ಮಾಸ್ಟರ್ ಪ್ಲಾನ್ ಮಾಡಲಿದ್ದಾರೆ.. ಬಿಜೆಪಿಯ ಭದ್ರಕೋಟೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಗೆಲುವಿನ ಯಾತ್ರೆ ಮುಂದುವರಿಸಲಿದ್ದಾರೆ.

Share with Friends
author avatar
News Desk