BlogLatestರಾಷ್ಟ್ರೀಯ-National

ತೆಲಂಗಾಣದಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ 6 ಮಾವೋವಾದಿಗಳ ಹತ್ಯೆ

ನವದೆಹಲಿ: ತೆಲಂಗಾಣದ ಭದ್ರಾದ್ರಿ ಕೋತಗುಡೆಮ್ ಬಳಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ 6 ಮಾವೋವಾದಿಗಳು ಸಾವನ್ನಪ್ಪಿದ್ದಾರೆ.ಛತ್ತೀಸಗಢ ಗಡಿಯ ಸಮೀಪದಲ್ಲಿರುವ ಕರಕಗುಡೆಮ್‌ನ ರಘುನಾಥಪಾಲೆಂ ಬಳಿಯಿರುವ ಕಾಡಿನಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಎನ್‌ಕೌಂಟರ್ ಸಂದರ್ಭದಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

ದಾಂತೇವಾಡ ಎಸ್‌ಪಿ ಗೌರವ್ ರೈ ಮಾತನಾಡಿ, ನಕ್ಸಲರಿಂದ ಎಸ್‌ಎಲ್‌ಆರ್ ರೈಫಲ್‌ಗಳು, 303 ರೈಫಲ್‌ಗಳು ಮತ್ತು 315 ಬೋರ್ ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಛತ್ತೀಸ್‌ಗಢ ಎನ್‌ಕೌಂಟರ್‌ನಲ್ಲಿ ಹತರಾದವರಲ್ಲಿ ತೆಲಂಗಾಣದ ಉನ್ನತ ಮಾವೋವಾದಿ ನಾಯಕರಾಗಿದ್ದ ಮಚೆರ್ಲಾ ಇಸೋಬು, ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಸದಸ್ಯರಾಗಿದ್ದಾರೆ. ಸಿಪಿಐ ಪಕ್ಷದ ಕೇಂದ್ರ ಮಿಲಿಟರಿ ಮತ್ತು ಮಹಾರಾಷ್ಟ್ರ-ಛತ್ತೀಸಗಢ ಗಡಿಯ ಉಸ್ತುವಾರಿ ವಹಿಸಿದ್ದರು.

ಛತ್ತೀಸಗಢ ಭದ್ರತಾ ಪಡೆಗಳು ದಂತೆವಾಡ ಮತ್ತು ಬಿಜಾಪುರದ ಗಡಿಯ ಕಾಡಿನಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ 6 ಮಹಿಳಾ ಮಾವೋವಾದಿಗಳು ಸೇರಿದಂತೆ ಒಟ್ಟು 9 ಮಾವೋವಾದಿಗಳನ್ನು ಹೊಡೆದುರುಳಿಸಿದ ಎರಡು ದಿನಗಳ ಬಳಿಕ ಈ ಎನ್‌ಕೌಂಟರ್ ನಡೆದಿದೆ.

Share with Friends
author avatar
News Desk