Latestಬೆಂಗಳೂರು-Bengaluruರಾಜ್ಯ-Karnataka

ಸಿಲಿಕಾನ್‌ ಸಿಟಿಯಲ್ಲಿ ನಾಳೆ, ನಾಡಿದ್ದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ( Bengaluru) ಗುರುವಾರ ಮತ್ತು ಶುಕ್ರವಾರ ಕಾವೇರಿ ನೀರು (Cauvery Water) ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಜೂನ್ 6 ರಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ನೀರು ಪೂರೈಕೆ ಸ್ಥಗಿತವಾಗಲಿದೆ. ಕಾವೇರಿ 5ನೇ ಹಂತ ಯೋಜನೆ ಅನುಷ್ಠಾನ ಸಂಬಂಧ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ-1, 2 ಹಾಗೂ 3 ಹಂತಗಳ ಘಟಕಗಳು ಬಂದ್ ಆಗಲಿದೆ. ಇದನ್ನೂ ಓದಿ: ದೆಹಲಿ-ಟೊರೊಂಟೂಗೆ ತೆರಳುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿ

https://youtu.be/Sx7PrNp35Is?si=p6hPd9saGw7Nw1wE

ಕಾವೇರಿ 4ನೇ ಹಂತದ ಒಂದನೇ ಮತ್ತು ಎರಡನೇ ಘಟಕಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ2 ವರೆಗೆ ಬಂದ್‌ ಆಗಲಿರುವ ಕಾರಣ ಎರಡು ದಿನ ಬೆಂಗಳೂರು ನಗರದಲ್ಲಿ ನೀರು ಪೂರೈಕೆ ಸ್ಥಗಿತವಾಗಲಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ – ಎಫ್‌ಐಆರ್‌ ದಾಖಲಿಸಿಕೊಂಡ ಸಿಬಿಐ

https://youtu.be/bJ8aWd95gqc?si=Agazr_Ah9DEvxElZ

ಘಟಕಗಳು ಬಂದ್‌ ಆಗಿರುವ ಕಾರಣ ಜೂನ್ 6 ಮತ್ತು 7 ರಂದು ನೀರು ಶೇಖರಿಸಿಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ (BWSSB) ಮನವಿ ಮಾಡಿದೆ. ಇದನ್ನೂ ಓದಿ: ಇಂದಿರಾ ಗಾಂಧಿಯನ್ನು ಹತ್ಯೆಗೈದ ಅಂಗರಕ್ಷಕನ ಪುತ್ರನಿಗೆ ಜಯ

https://youtu.be/lc15CaHVVn4?si=orOAaC9fYrtmUYSM
Share with Friends
author avatar
News Desk