BlogEntertainmentರಾಜ್ಯ-Karnataka

ರೇಣುಕಾಸ್ವಾಮಿ ಪ್ರಕರಣ : ನಟ ದರ್ಶನ್‌, ಪವಿತ್ರಾಗೌಡ ಸೇರಿ 7 ಮಂದಿಗೆ ಜಾಮೀನು ನೀಡಿದ ಹೈಕೋರ್ಟ್‌

ಬೆಂಗಳೂರು : ರೇಣಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್‌, ಪವಿತ್ರಾಗೌಡ ಸೇರಿದಂತೆ ಏಳು ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನೀಡಿದೆ. ನಟ ದರ್ಶನ್‌ , ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜೀತ್‌ ಶೆಟ್ಟಿ ಅವರು ಕಾಯ್ದಿರಿಸಿದ ತೀರ್ಪನ್ನು ಪ್ರಕಟಿಸಿ ಪ್ರಕರಣದ ಎಲ್ಲಾ ಏಳು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದರು.

ಏಳು ತಿಂಗಳ ಬಳಿಕ ಪ್ರಕರಣದ ಆರೋಪಿಗಳಾದ ದರ್ಶನ್‌, ಪವಿತ್ರಾ ಗೌಡ, ನಾಗರಾಜ್‌, ಅನುಕುಮಾರ್‌, ಲಕ್ಷ್ಮಣ್‌. ಎಂ.ಜಗದೀಶ್‌, ಪ್ರದೂಶ್‌ ರಾವ್‌ ಅವರುಗಳಿಗೆ ಜಾಮೀನು ದೊರೆತಿದೆ. ಪವಿತ್ರಾ ಗೌಡ ಅವರು ಬೆಂಗಳೂರು ಜೈಲು, ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಹಾಗೂ ಇತರರ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು. ಅದರಲ್ಲಿ ಕೆಲವರು ಜಾಮೀನು ಪಡೆದಿದ್ದರು. ಇಂದು ಪ್ರಕರಣದ ಎಲ್ಲಾ ಏಳು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ನೀಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜೂ.11ರಂದು ದರ್ಶನ್‌ ಬಂಧನವಾಗಿತ್ತು. ದರ್ಶನ್‌, ಪವಿತ್ರಾ ಗೌಡ ಸೇರಿ 17 ಜನರ ಬಂಧನವಾಗಿತ್ತು. ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಈ ಜೈಲಿನಲ್ಲಿ ರಾಜಾತಿಥ್ಯ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಸೇರಿದಂತೆ ಹಲವು ಆರೋಪಿಗಳನ್ನು ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿತ್ತು.

ಇತ್ತೀಚೆಗೆ ದರ್ಶನ್‌ಗೆ ಬೆನ್ನು ಇದ್ದ ಕಾರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿರಬೇಕಾದ ಹಿನ್ನಲೆಯಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು. ಜಾಮೀನು ಪಡೆದು ಬಿಜಿಎಸ್‌‍ ಆಸ್ಪತ್ರೆಗೆ ಅವರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಡಿ.11ಕ್ಕೆ ಜಾಮೀನು ಅವಧಿ ಅಂತ್ಯವಾಗಬೇಕಿತ್ತು. ಆದರೆ ಇಷ್ಟುದಿನ ದರ್ಶನ್‌ಗೆ ರಕ್ತದೊತ್ತಡ ಎಂದು ಅವರ ಪರ ವಕೀಲ ನಾಗೇಶ್‌ ಅವರು ಬೆನ್ನು ನೋವಿನ ಪರಿಣಾಮ ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತಾದರೂ ಫಿಜಿಯೋ ಥೆರಪಿ ಮೂಲಕವೇ ಚಿಕಿತ್ಸೆ ಪಡೆಯುತ್ತಿದ್ದರು.

ಧನ್ವಿರ್ ಪೋಸ್ಟ್ :
ದರ್ಶನ್ ಗೆ ಜಾಮೀನು ಮಂಜೂರು ನಟ ಧನ್ವಿರ್ ಪೋಸ್ಟ್, ತಾಯಿ ಚಾಮುಂಡೇಶ್ವರಿ ಫೋಟೋ ಹಾಕಿ ಸಂತಸ ವ್ಯಕ್ತಪಡಿಸಿದ ನಟ. ಜೊತೆಗೆ ದರ್ಶನ್ ಜೊತೆ ಇರೋ ಫೋಟೋ ಹಾಕಿ ಉಸಿರಿರೋವರೆಗೂ ಇರ್ತಿವಿ ನಿಮ್ಮ ಹಿಂದೆ ಎಂದು ಪೋಸ್ಟ್, ದರ್ಶನ್ ಗೆ ಬೈಲ್ ಸಿಗಲು ಓಡಾಟದಲ್ಲಿ ವಿಜಯಲಕ್ಷ್ಮಿ, ದಿನಕರ್ ಜೊತೆಯಾಗಿದ್ದ ಧನ್ವಿರ್ ಬೈಲ್ ಗೂ ಸೂರಿಟಿ ನೀಡಿದ್ದರು.

ಅಭಿಮಾನಿಗಳ ಸಂಭ್ರಮ :
ನಟ ದರ್ಶನ ಮನೆ ಮುಂದೆ ಅಭಿಮಾನಿಗಳ ಸಂಭ್ರಮ. ಆರ್ ಆರ್ ನಗರದಲ್ಲಿರುವ ನಿವಾಸಕ್ಕೆ ಅಭಿಮಾನಿಗಳು ಲಗ್ಗೆ, ದರ್ಶನ್ ಗೆ ಬೇಲ್ ಸಿಕ್ಕ ಬೆನ್ನಲ್ಲೇ ಅಭಿಮಾನಿಗಳ ಹರ್ಷದ್ಗೋರ, ತೂಗುದೀಪ ನಿಲಯದ ಬೋರ್ಡ್ ಗೆ ಹೂ ಹಾಕಿ ಸಂಭ್ರಮಿಸುತ್ತಿರುವ ದರ್ಶನ್ ಅಭಿಮಾನಿಗಳು

Share with Friends
author avatar
News Desk