Blogರಾಜ್ಯ-Karnatakaಹಾಸನ-Hassan

ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ವೇಳೆ ಸಿಎಂ ಬಾಗಿನ ಬಿಡಲು ನಿರ್ಮಿಸಿದ್ದ ಚಪ್ಪರ ಕುಸಿತ

ಹಾಸನ : ಎತ್ತಿನಹೊಳೆ ಯೋಜನೆ ‌ಹಂತ-೧ ಉದ್ಘಾಟನೆ,ಗಂಗಾ ಪೂಜೆ ಮತ್ತು ಬಾಗೀನ ಅರ್ಪಣೆ ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಚಪ್ಪರ ಮುರಿದು ಬಿದ್ದಿದೆ. ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ವೇದಿಕೆ ಎದುರಿಗೆ ನಿರ್ಮಿಸಿದ್ದ ಹೂವಿನಿಂದ ಅಲಂಕಾರ ಮಾಡಲಾಗಿದ್ದ ಮಂಟಪದ ಚಪ್ಪರ ದಿಢೀರ್ ಕುಸಿದಿದೆ. ಸಿಎಂ, ಡಿಸಿಎಂ ಹಾಗೂ ಸಚಿವರು ನಿಂತು ಬಾಗೀನ ಅರ್ಪಿಸಲು ಈ ಮಂಟಪ ನಿರ್ಮಿಸಲಾಗಿತ್ತು.

ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಹಳ್ಳಗಳಿಂದ ನೀರನ್ನು 7 ಜಿಲ್ಲೆಗಳಿಗೆ ಕುಡಿಯುವ ನೀರಿನ ಪೂರೈಕೆಗೆ ಬಳಸುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಕಾಮಗಾರಿ ಇಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಈ ಹಿನ್ನೆಲೆ ಅಗತ್ಯ ಸಿದ್ಧತೆ ಮಾಡಿ ಹೂವಿನ ಗೋಪುರವನ್ನು ಹಾಕಲಾಗಿತ್ತು. ಸದ್ಯ ಗಾಳಿ ರಭಸಕ್ಕೆ ಕುಸಿದು ಬಿದ್ದಿದೆ.

Share with Friends
author avatar
News Desk