Latestಚುನಾವಣೆ-Electionರಾಜ್ಯ-Karnataka

ವಿಧಾನಸಭೆ ಚುನಾವಣೆ ಮುಡ್‌ನಿಂದ ಸಿಎಂ ಇನ್ನು ಹೊರ ಬಂದಿಲ್ಲ: ಜೋಶಿ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನು ವಿಧಾನಸಭೆ ಮೂಡ್‌ನಿಂದ ಇನ್ನು ಹೊರಗೆ ಬಂದಿಲ್ಲ. ಸಿಎಂ ಇನ್ನು ವಿಧಾನಸಭೆ ಚುನಾವಣೆ ಅಂತಾನೇ ತಿಳಿದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಷ್ಟಿçÃಯ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು. ಜೊತೆಗೆ ಪ್ರಧಾನಿ ಮೋದಿ ವಿಕಸಿಕ ಭಾರತದ ಬಗ್ಗೆ ಮಾತನಾಡುತ್ತಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವದೇ ಚರ್ಚೆಗಳನ್ನು ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮದ್ಯನೀತಿ ಹಗರಣ: ಬಿಆರ್​ಎಸ್​ ನಾಯಕಿ ಕೆ. ಕವಿತಾ ನ್ಯಾಯಾಂಗ ಬಂಧನ ವಿಸ್ತರಣೆ

https://youtu.be/mIsJ9y60B1g?si=LpzpxWOFzqlen3kD

ಪ್ರಧಾನಿ ಮೋದಿ ಬಳಿ ರಾಜ್ಯ ಸಂಸದರು ಮಾತಾಡಲ್ಲ ಎಂಬ ಮುಖ್ಯಂತ್ರಿ ಸಿದ್ದರಾಮಯ್ಯ ಹೇಳೀಕೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಬಳಿ ಸಿಎಂ ಮಾತನಾಡಲ್ಲಿ. ಕುರ್ಚಿಗೆ ಅಂಟಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸಿದ್ದರಾಮಯ್ಯ ಹೇಳಿಕೆ ಕೊಟ್ಟರು. ರಾಹುಲ್ ಗಾಂಧಿ ಮುಂದೆ ಹೆದರಿ ಬಗ್ಗುವವರು ನನಗೇನು ಹೇಳುತ್ತಾರೆ ಎಂದು ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೈಕ್ ಅಪಘಾತ- ತಂದೆ ಮಗ ದಾರುಣ ಸಾವು

Share with Friends
author avatar
News Desk