ರಾಮನವಮಿ ಮೆರವಣಿಗೆ ದಿನ ಬಾಂಬ್ ಸ್ಫೋಟ NIA ತನಿಖೆಗೆ ಆದೇಶ
ಕೋಲ್ಕತ್ತಾ: ರಾಮನವಮಿ (Rama Navami) ಮೆರವಣಿಗೆ ದಿನ ಬಾಂಬ್ (Bomb) ಸ್ಫೋಟಗೊಂಡ ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಹೈಕೋರ್ಟ್ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ ಆದೇಶಿಸಿದೆ.
ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್ನಲ್ಲಿ ನಡೆದ ಘಟನೆಯ ತನಿಖೆಯನ್ನು ಸಿಬಿಐ (CBI) ಮತ್ತು ಎನ್ಐಎಯಿಂದ (NIA) ನಡೆಸಬೇಕೆಂದು ಕೋರಿ ಎರಡು ಸಾರ್ವಜನಿಕ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಬಾಂಬ್ ಸ್ಫೋಟದ ತನಿಖೆ ಎನ್ಐಎ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ತನಿಖೆ ನಡೆಸುವಂತೆ ಆದೇಶಿಸಿತು. ಇದನ್ನೂ ಓದಿ:ಚಿತ್ರದುರ್ಗದಲ್ಲಿ ಕರ್ತವ್ಯ ನಿರತ ಚುನಾವಣಾ ಮಹಿಳಾ ಸಿಬ್ಬಂದಿ ಸಾವು
ಕೋರ್ಟ್ ಮುಂದಿನ ವಿಚಾರಣೆಯನ್ನು ಮೇ 10ಕ್ಕೆ ಮುಂದೂಡಿದ್ದು ಈ ವೇಳೆ ಎನ್ಐಎ ತನಿಖೆಯ ವರದಿ ಸಲ್ಲಿಸಬೇಕೆಂದು ಸೂಚಿಸಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್ಕೌಂಟರ್- ಇಬ್ಬರು ಉಗ್ರರ ಸಾವು
