BlogLatestTop Storiesರಾಜ್ಯ-Karnataka

ಇನ್ಸ್‌ಪೆಕ್ಟರ್‌ ತಿಮ್ಮೇಗೌಡ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಕೊನೆ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆ

ಬಿಡದಿ : ಇನ್ಸ್ ಪೆಕ್ಟರ್ ತಿಮ್ಮೇಗೌಡ ಅವರ ಆತ್ಮಹತ್ಯೆ ಸಂಬಂಧ ತನಿಖೆ ನಡೆಸುತ್ತಿರುವ ಕಗ್ಗಲಿಪುರ ಪೊಲೀಸರಿಗೆ ತಿಮ್ಮೇಗೌಡ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಕೊನೆ ಕ್ಷಣಗಳ ಸಿಸಿಟಿವಿ ಲಭ್ಯವಾಗಿದೆ.

ಭಾನುವಾರ ರಾತ್ರಿ 11.36 ರ ಸಮಯದಲ್ಲಿ ನಡೆದುಕೊಂಡು ಕೈಯಲ್ಲಿ ಕವರ್ ವೊಂದನ್ನ ಹಿಡಿದು ಹೊರಟಿದ್ದ ತಿಮ್ಮೇಗೌಡ ಹೊರಟಿದ್ದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ಕೈಯಲ್ಲಿರುವ ಕವರ್ ನಲ್ಲಿ ಹಗ್ಗ ಇರುವ ಶಂಕೆ ಇದ್ದು, ಹಗ್ಗವನ್ನ ಕವರ್ ನಲ್ಲಿ ಹಾಕಿಕೊಂಡು ನಿರ್ಜನ ಪ್ರದೇಶದ ಕಡೆ ಹೊರಟಿದ್ದ ತಿಮ್ಮೇಗೌಡ ದೃಶ್ಯ ಸೆರೆಯಾಗಿದೆ.

ಮಾರ್ಗ ಮಧ್ಯೆ ಮನಸ್ಸು ಬದಲಾಯಿಸಿ ಕೆಲಕಾಲ ನಿಂತಿದ್ದ ಇನ್ಸ್‌ಪೆಕ್ಟರ್,ಐದಾರು ಹೆಜ್ಜೆ ಹಿಂದೆ ಇಟ್ಟು, ಮತ್ತೆ ಸಾವಿನ ದಾರಿ ಹಿಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಕಗ್ಗಲಿಪುರ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ತಿಮ್ಮೇಗೌಡ ಆತ್ಮಹತ್ಯೆ ಶರಣಾಗಿದ್ದಾರೆ.

Share with Friends
author avatar
News Desk